-
ನ್ಯಾಯಾಸನದ ಮುಂದೆ ನೀವು ಹೇಗೆ ನಿಲ್ಲುವಿರಿ?ಕಾವಲಿನಬುರುಜು—1995 | ಅಕ್ಟೋಬರ್ 15
-
-
20, 21. ನಮ್ಮ ಸಮಯಕ್ಕೆ ಸಂಬಂಧಿಸುವ ಏನನ್ನು ಯೇಸುವಿನ ಅಪೊಸ್ತಲರು ಕೇಳಿದರು, ಇದು ಯಾವ ಪ್ರಶ್ನೆಗೆ ನಡಿಸಿತು?
20 ಯೇಸುವು ಸಾಯುವುದಕ್ಕೆ ತುಸು ಮೊದಲು, ಅವನ ಅಪೊಸ್ತಲರು ಅವನೊಡನೆ ಕೇಳಿದ್ದು: “ಈ ಸಂಗತಿಗಳು ಯಾವಾಗ ಆಗುವುವು ಮತ್ತು ನಿನ್ನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಸೂಚನೆಯೇನು?” (ಮತ್ತಾಯ 24:3, NW) ‘ಅಂತ್ಯವು ಬರುವ’ ಮೊದಲು ಭೂಮಿಯ ಮೇಲೆ ಆಗುವ ಗಮನಾರ್ಹವಾದ ವಿಕಸನಗಳ ಕುರಿತು ಯೇಸು ಮುಂತಿಳಿಸಿದನು. ಆ ಅಂತ್ಯಕ್ಕೆ ತುಸು ಮೊದಲಾಗಿ, ಜನಾಂಗಗಳು “ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು.”—ಮತ್ತಾಯ 24:14, 29, 30.
21 ಆದರೆ ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಬರುವಾಗ ಆ ಜನಾಂಗಗಳು ಹೇಗೆ ಕಂಡುಬರುವವು? ಕುರಿಗಳು ಮತ್ತು ಆಡುಗಳ ದೃಷ್ಟಾಂತದಿಂದ ನಾವು ಇದನ್ನು ಕಂಡುಹಿಡಿಯೋಣ. ಅದು ಈ ಮಾತುಗಳಿಂದ ಆರಂಭಗೊಳ್ಳುತ್ತದೆ: “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು.”—ಮತ್ತಾಯ 25:31, 32.
22, 23. ಕುರಿಗಳ ಮತ್ತು ಆಡುಗಳ ದೃಷ್ಟಾಂತವು ತನ್ನ ನೆರವೇರಿಕೆಯನ್ನು 1914ರಲ್ಲಿ ಆರಂಭಿಸಲಿಲ್ಲವೆಂಬುದನ್ನು ಯಾವ ವಿಷಯಗಳು ತೋರಿಸುತ್ತವೆ?
22 ನಾವು ದೀರ್ಘಸಮಯದಿಂದ ತಿಳಿದಿದ್ದಂತೆ, ಯೇಸು ರಾಜಾಧಿಕಾರದಲ್ಲಿ 1914ರಲ್ಲಿ ಕುಳಿತುಕೊಂಡಾಗ, ಈ ದೃಷ್ಟಾಂತವು ಅನ್ವಯಿಸುತ್ತದೊ? ಸರಿ, ಮತ್ತಾಯ 25:34 ಅವನನ್ನು ರಾಜನೆಂದು ಕರೆಯುವುದರಿಂದ, ತರ್ಕಬದ್ಧವಾಗಿ ಈ ದೃಷ್ಟಾಂತವು ಯೇಸು 1914ರಲ್ಲಿ ರಾಜನಾದಂದಿನಿಂದ ಅನ್ವಯವನ್ನು ಕಂಡುಕೊಳ್ಳುತ್ತದೆ. ಆದರೆ ಆ ಬಳಿಕ ಬೇಗನೆ ಅವನು ಯಾವ ನ್ಯಾಯವಿಚಾರಣೆಯನ್ನು ಮಾಡಿದನು? ಅದು “ಎಲ್ಲಾ ದೇಶಗಳ ಜನರ” ನ್ಯಾಯವಿಚಾರಣೆಯಲ್ಲ. ಬದಲಾಗಿ, ಅವನು “ದೇವರ ಮನೆ”ಯನ್ನು ರಚಿಸುವವರೆಂದು ಹೇಳಿಕೊಳ್ಳುವವರ ಮೇಲೆ ತನ್ನ ಗಮನವನ್ನು ಹರಿಸಿದನು. (1 ಪೇತ್ರ 4:17) ಮಲಾಕಿಯ 3:1-3ಕ್ಕೆ ಹೊಂದಿಕೆಯಾಗಿ, ಯೆಹೋವನ ದೂತನಾದ ಯೇಸು, ಭೂಮಿಯಲ್ಲಿ ಉಳಿದಿದ್ದ ಅಭಿಷಿಕ್ತ ಕ್ರೈಸ್ತರನ್ನು ನ್ಯಾಯನಿರ್ಣಾಯಕವಾಗಿ ಪರೀಕ್ಷಿಸಿದನು. ಅದು ಯಾರು “ದೇವರ ಮನೆ”ಯೆಂದು ತಪ್ಪಾಗಿ ಹೇಳಿಕೊಂಡಿದ್ದರೊ, ಆ ಕ್ರೈಸ್ತಪ್ರಪಂಚದ ಮೇಲೆ ನ್ಯಾಯದಂಡನೆಯ ಸಮಯವೂ ಆಗಿತ್ತು.c (ಪ್ರಕಟನೆ 17:1, 2; 18:4-8) ಆದರೂ ಆ ಸಮಯದಲ್ಲಿ, ಅಥವಾ ಅಂದಿನಿಂದ, ಯೇಸುವು ಎಲ್ಲಾ ದೇಶಗಳ ಜನರನ್ನು ಅಂತಿಮವಾಗಿ ಕುರಿಗಳಾಗಿ ಅಥವಾ ಆಡುಗಳಾಗಿ ನ್ಯಾಯತೀರಿಸಲು ಕುಳಿತನೆಂದು ಯಾವುದೂ ಸೂಚಿಸುವುದಿಲ್ಲ.
23 ಆ ದೃಷ್ಟಾಂತದಲ್ಲಿ ಯೇಸುವಿನ ಚಟುವಟಿಕೆಯನ್ನು ನಾವು ವಿಶ್ಲೇಷಿಸುವಲ್ಲಿ, ಅವನು ಎಲ್ಲಾ ದೇಶಗಳಿಗೆ ಅಂತಿಮವಾಗಿ ನ್ಯಾಯವಿಧಿಸುತ್ತಾನೆಂದು ಗಮನಿಸುತ್ತೇವೆ. ಅಂತಹ ನ್ಯಾಯವಿಚಾರಣೆಯು, ಕಳೆದ ದಶಕಗಳಲ್ಲಿ ಸತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ನಿತ್ಯಮರಣ ಅಥವಾ ನಿತ್ಯಜೀವಕ್ಕೆ ಯೋಗ್ಯನಾಗಿ ನ್ಯಾಯವಿಧಿಸಲ್ಪಟ್ಟಿದ್ದಾನೋ ಎಂಬಂತೆ, ಅನೇಕ ವರ್ಷಗಳಲ್ಲಿ ಮುಂದುವರಿಯುವುದೆಂದು ಆ ದೃಷ್ಟಾಂತವು ತೋರಿಸುವುದಿಲ್ಲ. ಇತ್ತೀಚಿನ ದಶಕಗಳಲ್ಲಿ ಸತ್ತಿರುವ ಅಧಿಕಾಂಶ ಮಂದಿ ಮಾನವ ಕುಲದ ಸಾಮಾನ್ಯ ಸಮಾಧಿಗೆ ಹೋಗಿದ್ದಾರೆಂದು ಕಾಣುತ್ತದೆ. (ಪ್ರಕಟನೆ 6:8; 20:13) ಆದರೆ ಆ ದೃಷ್ಟಾಂತವು, ಯೇಸುವು, ಆಗ ಜೀವಿಸಿರುತ್ತ ಅವನ ನ್ಯಾಯದಂಡನೆಯನ್ನು ಎದುರಿಸುವ “ಎಲ್ಲಾ ದೇಶಗಳ ಜನ”ರಿಗೆ ನ್ಯಾಯವಿಧಿಸುವ ಸಮಯವನ್ನು ಚಿತ್ರಿಸುತ್ತದೆ.
24. ಕುರಿಗಳ ಮತ್ತು ಆಡುಗಳ ದೃಷ್ಟಾಂತವು ಯಾವಾಗ ನೆರವೇರುವುದು?
24 ಇನ್ನೊಂದು ಮಾತಿನಲ್ಲಿ, ಆ ದೃಷ್ಟಾಂತವು ಮನುಷ್ಯಕುಮಾರನು ತನ್ನ ಮಹಿಮೆಯಿಂದ ಬರುವ ಆ ಭವಿಷ್ಯತ್ತಿಗೆ ಕೈತೋರಿಸುತ್ತದೆ. ಆಗ ಜೀವಿಸುತ್ತಿರುವ ಜನರಿಗೆ ನ್ಯಾಯತೀರಿಸಲು ಅವನು ಆಸೀನನಾಗುವನು. ಅವನ ನ್ಯಾಯತೀರ್ಪು, ತಾವು ಏನಾಗಿದ್ದೇವೆಂದು ಅವರು ತೋರಿಸಿಕೊಟ್ಟಿದ್ದಾರೊ ಅದರ ಮೇಲೆ ಆಧಾರಗೊಂಡಿರುವುದು. ಆ ಸಮಯದಲ್ಲಿ, “ಶಿಷ್ಟರಿಗೂ ದುಷ್ಟರಿಗೂ . . . ಇರುವ ತಾರತಮ್ಯ”ವು ಸ್ಪಷ್ಟವಾಗಿಗಿ ಸ್ಥಾಪಿಸಲ್ಪಟ್ಟಿರುವುದು. (ಮಲಾಕಿಯ 3:18) ತೀರ್ಪಿನ ಸಾಕ್ಷತ್ ವಿಧಿಸುವಿಕೆ ಮತ್ತು ನಿರ್ವಹಿಸುವಿಕೆಯು ಒಂದು ಸೀಮಿತ ಸಮಯದಲ್ಲಿ ಜಾರಿಗೆ ಬರುವುದು. ಯೇಸುವು ವ್ಯಕ್ತಿಗಳ ಕುರಿತು ಯಾವುದು ವ್ಯಕ್ತವಾಗಿದೆಯೋ ಅದರ ಮೇಲೆ ನ್ಯಾಯವಾದ ನಿರ್ಣಯಗಳನ್ನು ಕೊಡುವನು.—2 ಕೊರಿಂಥ 5:10ನ್ನು ಸಹ ನೋಡಿರಿ.
25. ಮನುಷ್ಯಕುಮಾರನು ಒಂದು ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದನ್ನು ಹೇಳುವಾಗ ಮತ್ತಾಯ 25:31 ಏನನ್ನು ಚಿತ್ರಿಸುತ್ತಿದೆ?
25 ಹಾಗಾದರೆ, ಇದರ ಅರ್ಥವು, ಮತ್ತಾಯ 25:31ರಲ್ಲಿ ಹೇಳಿರುವ, ಯೇಸುವು ನ್ಯಾಯತೀರ್ಪಿಗಾಗಿ ‘ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವುದು,’ ಈ ಬಲಾಢ್ಯ ಅರಸನು ಜನಾಂಗಗಳ ಮೇಲೆ ನ್ಯಾಯವನ್ನು ವಿಧಿಸುವ ಮತ್ತು ನಿರ್ವಹಿಸುವ ಆ ಭವಿಷ್ಯತ್ತಿನ ಸಮಯಕ್ಕೆ ಅನ್ವಯಿಸುತ್ತದೆ. ಹೌದು, ಮತ್ತಾಯ 25:31-33, 46ರಲ್ಲಿ, ಯೇಸುವನ್ನೊಳಗೊಳ್ಳುವ ನ್ಯಾಯತೀರ್ಪಿನ ದೃಶ್ಯವು ದಾನಿಯೇಲ 7ನೆಯ ಅಧ್ಯಾಯದ, ಆಳುತ್ತಿರುವ ರಾಜನಾದ ಮಹಾವೃದ್ಧನು ನ್ಯಾಯಾಧೀಶನೋಪಾದಿ ತನ್ನ ಪಾತ್ರವನ್ನು ವಹಿಸಲು ಕುಳಿತುಕೊಳ್ಳುವುದಕ್ಕೆ ಸರಿಹೋಲುತ್ತದೆ.
26. ಈ ದೃಷ್ಟಾಂತದ ಯಾವ ಹೊಸ ವಿವರಣೆಯು ಸ್ಪಷ್ಟವಾಗಿಗುತ್ತದೆ?
26 ಕುರಿಗಳ ಮತ್ತು ಆಡುಗಳ ದೃಷ್ಟಾಂತದ ಈ ರೀತಿಯ ಅರ್ಥಮಾಡುವಿಕೆಯು ಕುರಿಗಳ ಮತ್ತು ಆಡುಗಳ ನ್ಯಾಯತೀರ್ಪು ಭವಿಷ್ಯತ್ತಿನಲ್ಲಿದೆ ಎಂದು ಸೂಚಿಸುತ್ತದೆ. ಅದು ಮತ್ತಾಯ 24:29, 30ರ “ಸಂಕಟವು” ಆರಂಭವಾದ ಬಳಿಕ ಮತ್ತು ಮನುಷ್ಯಕುಮಾರನು ‘ತನ್ನ ಮಹಿಮೆಯಲ್ಲಿ’ ಬಂದ ಬಳಿಕ ಸಂಭವಿಸುವುದು. (ಹೋಲಿಸಿ ಮಾರ್ಕ 13:24-26.) ಆ ಬಳಿಕ, ಇಡೀ ದುಷ್ಟತ್ವವು ತನ್ನ ಅಂತ್ಯದಲ್ಲಿರುವಾಗ, ಯೇಸುವು ನ್ಯಾಯಸಭೆಯನ್ನು ನಡೆಸಿ, ತೀರ್ಪನ್ನು ವಿಧಿಸಿ ಅದನ್ನು ಜಾರಿಗೆ ತರುವನು.—ಯೋಹಾನ 5:30; 2 ಥೆಸಲೊನೀಕ 1:7-10.
-
-
ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು?ಕಾವಲಿನಬುರುಜು—1995 | ಅಕ್ಟೋಬರ್ 15
-
-
3. ತನ್ನ ಭಾಷಣದ ಮೊದಲಲ್ಲಿ, ಮಹಾ ಸಂಕಟವು ಆರಂಭಗೊಂಡ ಕೂಡಲೇ, ಏನು ವಿಕಸನಗೊಳ್ಳುವುದೆಂದು ಯೇಸು ಹೇಳಿದನು?
3 ಆ ಮಹಾ ಸಂಕಟವು ಆರಂಭವಾದ “ಕೂಡಲೆ” ಯೇಸು ಗಮನಾರ್ಹವಾದ ವಿಕಸನಗಳನ್ನು, ನಾವು ಕಾಯುವ ವಿಕಸನಗಳನ್ನು ಮುಂತಿಳಿಸಿದನು. “ಮನುಷ್ಯಕುಮಾರನನ್ನು ಸೂಚಿಸುವ ಗುರುತು” ಆಗ ತೋರಿಬರುವುದೆಂದು ಅವನು ಹೇಳಿದನು. ಇದು “ಭೂಲೋಕದಲ್ಲಿರುವ ಎಲ್ಲಾ ಕುಲ”ದವರ ಮೇಲೆ ಮಹತ್ತಾದ ಪರಿಣಾಮವನ್ನು ಬೀರುವುದು. ಅವರು “ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವುದನ್ನು ಕಾಣುವರು.” ಮನುಷ್ಯಕುಮಾರನ ಕೂಡ, ‘ಅವನ ದೂತರು’ ಇರುವರು. (ಮತ್ತಾಯ 24:21, 29-31)a ಕುರಿಗಳ ಮತ್ತು ಆಡುಗಳ ದೃಷ್ಟಾಂತದ ವಿಷಯದಲ್ಲೇನು? ಆಧುನಿಕ ಬೈಬಲುಗಳು ಇದನ್ನು 25ನೆಯ ಅಧ್ಯಾಯದಲ್ಲಿ ಹಾಕುವುದಾದರೂ, ಅದು ಯೇಸುವಿನ ಉತ್ತರದ, ಅವನ ಮಹಿಮೆಯ ಬರೋಣದ ಹೆಚ್ಚಿನ ವಿವರಣೆಗಳನ್ನು ಕೊಡುವ ಮತ್ತು “ಎಲ್ಲಾ ದೇಶಗಳ ಜನರ” ಮೇಲೆ ಅವನ ನ್ಯಾಯತೀರಿಸುವಿಕೆಯ ಮೇಲೆ ಕೇಂದ್ರೀಕರಿಸುವ, ಭಾಗವಾಗಿದೆ.—ಮತ್ತಾಯ 25:32.
ದೃಷ್ಟಾಂತದಲ್ಲಿರುವ ವ್ಯಕ್ತಿಗಳು
4. ಕುರಿಗಳ ಮತ್ತು ಆಡುಗಳ ದೃಷ್ಟಾಂತವು ಯೇಸುವಿನ ಕುರಿತು ಆರಂಭಿಕವಾಗಿ ಏನನ್ನುತ್ತದೆ, ಮತ್ತು ಯಾರು ಕೂಡ ದೃಶ್ಯದೊಳಗಡೆ ಬರುತ್ತಾರೆ?
4 “ಮನುಷ್ಯಕುಮಾರನು . . . ಬರುವಾಗ” ಎಂದು ಹೇಳುವ ಮೂಲಕ ಯೇಸುವು ದೃಷ್ಟಾಂತವನ್ನು ಪ್ರಾರಂಭಿಸುತ್ತಾನೆ. “ಮನುಷ್ಯಕುಮಾರನು” ಯಾರೆಂದು ನೀವು ತಿಳಿದಿರುವುದು ಸಂಭವನೀಯ. ಸುವಾರ್ತಾ ಲೇಖಕರು ಆ ಪದವಿನ್ಯಾಸವನ್ನು ಅನೇಕ ವೇಳೆ ಯೇಸುವಿಗೆ ಅನ್ವಯಿಸಿದರು. “ಮನುಷ್ಯಕುಮಾರನಂತಿರುವವನು” ‘ದೊರೆತನವನ್ನೂ ಘನತೆಯನ್ನೂ ರಾಜ್ಯವನ್ನೂ’ ಪಡೆಯಲಿಕ್ಕಾಗಿ ಮಹಾವೃದ್ಧನನ್ನು ಸಮೀಪಿಸುವುದರ ಕುರಿತು ದಾನಿಯೇಲನ ದರ್ಶನವನ್ನು ನಿಸ್ಸಂಶಯವಾಗಿ ಮನಸ್ಸಿನಲ್ಲಿಟ್ಟವನಾಗಿ, ಯೇಸು ತಾನೇ ಹಾಗೆ ಅನ್ವಯಿಸಿಕೊಂಡನು. (ದಾನಿಯೇಲ 7:13, 14; ಮತ್ತಾಯ 26:63, 64; ಮಾರ್ಕ 14:61, 62) ಈ ದೃಷ್ಟಾಂತದಲ್ಲಿ ಯೇಸು ಪ್ರಧಾನನಾಗಿರುವುದಾದರೂ, ಅವನು ಒಬ್ಬನಾಗಿರುವುದಿಲ್ಲ. ಈ ಭಾಷಣದ ಮೊದಲಲ್ಲಿ, ಮತ್ತಾಯ 24:30, 31ರಲ್ಲಿ ಉಲ್ಲೇಖಿಸಿರುವಂತೆ, ಮನುಷ್ಯಕುಮಾರನು ‘ಬಲ ಮತ್ತು ಬಹು ಮಹಿಮೆ’ಯಿಂದ ಬರುವಾಗ, ಅವನ ದೂತರು ಒಂದು ಮಹತ್ವದ ಪಾತ್ರವನ್ನು ವಹಿಸುವರೆಂದು ಅವನು ಹೇಳಿದನು. ಅದೇ ರೀತಿಯಲ್ಲಿ ಕುರಿಗಳ ಮತ್ತು ಆಡುಗಳ ದೃಷ್ಟಾಂತವು ಯೇಸು ತೀರ್ಪು ಕೊಡಲು ‘ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ’ ದೇವದೂತರು ಅವನೊಂದಿಗಿದ್ದರೆಂದು ತೋರಿಸುತ್ತದೆ. (ಹೋಲಿಸಿ ಮತ್ತಾಯ 16:27.) ಆದರೆ ನ್ಯಾಯಾಧೀಶನೂ ದೇವದೂತರೂ ಸ್ವರ್ಗದಲ್ಲಿರುವುದರಿಂದ, ಆ ದೃಷ್ಟಾಂತದಲ್ಲಿ ಮಾನವರನ್ನು ಚರ್ಚಿಸಲಾಗಿದೆಯೆ?
-
-
ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು?ಕಾವಲಿನಬುರುಜು—1995 | ಅಕ್ಟೋಬರ್ 15
-
-
ಸಮಾಂತರಗಳನ್ನು ಗಮನಿಸಿರಿ
ಮತ್ತಾಯ 24:29-31 ಮತ್ತಾಯ 25:31-33
ಮಹಾ ಸಂಕಟವು ಆರಂಭಿಸಿದ ಮನುಷ್ಯಕುಮಾರನು ಬರುತ್ತಾನೆ
ತರುವಾಯ, ಮನುಷ್ಯಕುಮಾರನು ಬರುತ್ತಾನೆ
-
-
ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು?ಕಾವಲಿನಬುರುಜು—1995 | ಅಕ್ಟೋಬರ್ 15
-
-
ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುತ್ತಾನೆ
-