ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
ಕನ್ನಡ ಪ್ರಕಾಶನಗಳು (1987-2026)
ಲಾಗ್ ಔಟ್
ಲಾಗಿನ್
ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಇಂದು

ಬುಧವಾರ, ಆಗಸ್ಟ್‌ 12

ದೇವರು ತನ್ನ ಮಗನ ರಕ್ತದ ಮೂಲಕ ಬಿಡುಗಡೆ ಬೆಲೆ ಕೊಟ್ಟು ನಮ್ಮನ್ನ ಬಿಡಿಸಿದನು. ಹೌದು ನಮ್ಮ ಪಾಪಗಳನ್ನ ಉದಾರವಾಗಿ ಕ್ಷಮಿಸಿದನು. ಹೀಗೆ ನಮಗೆ ಅಪಾರ ಕೃಪೆಯನ್ನ ಧಾರಾಳವಾಗಿ ತೋರಿಸಿದನು.—ಎಫೆ. 1:7.

ಪಾಪ ಮಾಡೋ ಮುಂಚೆ ಆದಾಮ ಹೇಗೆ ಪರಿಪೂರ್ಣನಾಗಿದ್ನೋ ಅದೇ ತರ ಯೇಸುನೂ ಒಬ್ಬ ಪರಿಪೂರ್ಣ ವ್ಯಕ್ತಿ ಆಗಿದ್ದ. ಈ ಅರ್ಥದಲ್ಲಿ ಆದಾಮ ಮತ್ತು ಯೇಸು ಸಮಾನರಾಗಿದ್ರು. (1 ಕೊರಿಂ. 15:45) ಹಾಗಾಗಿ ಯೇಸು ತನ್ನ ಜೀವ ತ್ಯಾಗ ಮಾಡಿ ಆದಾಮ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಬಿಡುಗಡೆಯ ಬೆಲೆ ಕೊಟ್ಟ. (ರೋಮ. 5:19) ಹೀಗೆ ಯೇಸು “ಕೊನೇ ಆದಾಮ” ಆದ. ಯೇಸು “ಎಲ್ಲ ಕಾಲಕ್ಕೂ ಒಂದೇ” ಬಲಿ ಅರ್ಪಿಸಿದ್ರಿಂದ ಆದಾಮ ಕಳ್ಕೊಂಡಿದ್ದನ್ನ ಮತ್ತೆ ಪಡ್ಕೊಳ್ಳೋಕೆ ಇನ್ನೊಬ್ಬ ಪರಿಪೂರ್ಣ ವ್ಯಕ್ತಿಯ ಅಗತ್ಯ ಇರ್ಲಿಲ್ಲ. (ಇಬ್ರಿ. 7:27; 10:12) ಪ್ರಾಯಶ್ಚಿತ್ತಕ್ಕೂ ಬಿಡುಗಡೆ ಬೆಲೆಗೂ ಏನು ವ್ಯತ್ಯಾಸ? ಪ್ರಾಯಶ್ಚಿತ್ತ ಅಂದ್ರೆ ಮನುಷ್ಯರು ತನ್ನ ಜೊತೆ ಮತ್ತೆ ಸ್ನೇಹ-ಸಂಬಂಧ ಬೆಳೆಸ್ಕೊಳ್ಳೋಕೆ ಯೆಹೋವ ತಗೊಂಡಿರೋ ಹೆಜ್ಜೆ. ಬಿಡುಗಡೆ ಬೆಲೆ ಅಂದ್ರೆ ಮನುಷ್ಯರ ಪಾಪಕ್ಕೆ ಪ್ರಾಯಶ್ಚಿತ್ತ ಮಾಡೋಕೆ ಕೊಟ್ಟ ಬೆಲೆ. ನಮ್ಮ ಪಾಪಗಳಿಗೋಸ್ಕರ ಬೆಲೆ ಕೊಡೋಕೆ ಯೇಸು ತನ್ನ ಪರಿಪೂರ್ಣ ಜೀವವನ್ನ ತ್ಯಾಗ ಮಾಡಿದ.—ಇಬ್ರಿ. 9:14. w25.02 5 ¶12-13

ದಿನದ ವಚನ ಓದಿ ಚರ್ಚಿಸೋಣ—2026

ಗುರುವಾರ, ಆಗಸ್ಟ್‌ 13

ದೇವರು ನಂಬಿಗಸ್ತನು, ನಿಮಗೆ ಸಹಿಸ್ಕೊಳ್ಳೋಕೆ ಆಗದೇ ಇರುವಷ್ಟರ ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ. ಕಷ್ಟ ಬಂದಾಗ ಅದನ್ನ ನೀವು ಸಹಿಸ್ಕೊಳ್ಳೋಕೆ ಬೇಕಾದ ಸಹಾಯವನ್ನೂ ಆತನು ಕೊಡ್ತಾನೆ.—1 ಕೊರಿಂ. 10:13.

ಯೆಹೋವ ಜೀವ ಇರೋ ದೇವರು ಅಂತ ಅರ್ಥ ಮಾಡ್ಕೊಂಡ್ರೆ ಸಮಸ್ಯೆಗಳು ಬಂದಾಗ ನಾವು ಸೋತು ಹೋಗಲ್ಲ. ಯಾಕೆ ಹಾಗೆ ಹೇಳಬಹುದು? ಸಮಸ್ಯೆಗಳು ಬಂದಾಗ ನಾವು ಒಂದು ಪ್ರಾಮುಖ್ಯ ವಿಷಯನ ನೆನಪಲ್ಲಿಡಬೇಕು. ಅದೇನಂದ್ರೆ ಕಷ್ಟಗಳು ಬಂದಾಗ ನಾವು ಯೆಹೋವನನ್ನ ಬಿಟ್ಟುಬಿಡ್ತೀವಿ ಅಂತ ಸೈತಾನ ಆರೋಪ ಹಾಕಿದ್ದಾನೆ. (ಯೋಬ 1:10, 11; ಜ್ಞಾನೋ. 27:11) ಕಷ್ಟಗಳು ಬಂದಾಗ್ಲೂ ನಿಯತ್ತಾಗಿದ್ರೆ ನಮಗೆ ಯೆಹೋವನ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸ್ತೀವಿ ಮತ್ತು ಸೈತಾನ ಸುಳ್ಳುಗಾರ ಅಂತ ನಿರೂಪಿಸ್ತೀವಿ. ಸರ್ಕಾರದಿಂದ ನೀವು ವಿರೋಧ ಎದುರಿಸ್ತಿದ್ದೀರಾ? ನಿಮಗೆ ಆರ್ಥಿಕ ಸಮಸ್ಯೆಗಳು ಇದೆಯಾ? ನೀವು ಸಿಹಿಸುದ್ದಿ ಹೇಳುವಾಗ ಜನರು ಕೇಳಿಸ್ಕೊಳ್ತಿಲ್ವಾ? ಅಥವಾ ನಿಮಗೆ ಬೇರೆ ಯಾವುದಾದ್ರೂ ಕಷ್ಟಗಳು ಇದೆಯಾ? ಹಾಗಿದ್ರೆ ಯೆಹೋವನ ಮನಸ್ಸನ್ನ ಖುಷಿ ಪಡಿಸೋಕೆ ಇದೆಲ್ಲ ಒಂದು ಅವಕಾಶ ಅಂತ ನೆನಸಿ. ಒಂದು ವಿಷಯ ನೆನಪಿಡಿ ನಿಮಗೆ ಸಹಿಸ್ಕೊಳ್ಳೋಕೆ ಆಗದೆ ಇರುವಷ್ಟು ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ. ಅಷ್ಟೇ ಅಲ್ಲ ಕಷ್ಟಗಳನ್ನ ಎದುರಿಸೋಕೆ ಬೇಕಾದ ಶಕ್ತಿನೂ ಕೊಡ್ತಾನೆ. w24.06 22 ¶9

ದಿನದ ವಚನ ಓದಿ ಚರ್ಚಿಸೋಣ—2026

ಶುಕ್ರವಾರ, ಆಗಸ್ಟ್‌ 14

ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ.—ಯಾಕೋ. 1:14.

ನಿಮ್ಮಲ್ಲಿ ಯಾವ ಬಲಹೀನತೆಗಳಿವೆ ಅಂತ ನಿಮಗೆ ಗೊತ್ತಿದೆಯಾ? ನನ್ನಲ್ಲಿ ಯಾವ ಬಲಹೀನತೆನೂ ಇಲ್ಲ, ಎಷ್ಟೇ ತಪ್ಪು ಮಾಡೋ ಆಸೆ ಬಂದ್ರೂ ನಾನು ಸರಿಯಾಗಿರೋದನ್ನೇ ಮಾಡ್ತೀನಿ ಅಂತ ಅಂದ್ಕೊಂಡ್ರೆ ನಮ್ಗೆ ನಾವೇ ಮೋಸ ಮಾಡ್ಕೊಳ್ತೀವಿ. (1 ಯೋಹಾ. 1:8) ಎಚ್ಚರವಾಗಿ ಇಲ್ಲಾಂದ್ರೆ ‘ಎಲ್ಲ ಚೆನ್ನಾಗಿ ತಿಳ್ಕೊಂಡಿರೋ ಕ್ರೈಸ್ತರೂ’ ತಪ್ಪು ಮಾಡಿಬಿಡಬಹುದು ಅಂತ ಅಪೊಸ್ತಲ ಪೌಲ ಹೇಳಿದ. (ಗಲಾ. 6:1) ಹಾಗಾಗಿ ನಮ್ಮ ಬಗ್ಗೆ ನಾವು ಚೆನ್ನಾಗಿ ತಿಳ್ಕೊಂಡಿರಬೇಕು ಮತ್ತು ನಮ್ಮಲ್ಲಿರೋ ಬಲಹೀನತೆಗಳನ್ನ ಕಂಡುಹಿಡಿಬೇಕು. (2 ಕೊರಿಂ. 13:5) ನಮ್ಮಲ್ಲಿ ಕೆಟ್ಟ ಆಸೆ ಹುಟ್ಟಿಸೋ ವಿಷ್ಯಗಳು ಯಾವುದು ಅಂತ ಗೊತ್ತಾದ ಮೇಲೆ ಏನು ಮಾಡಬೇಕು? ಆ ಆಸೆ ವಿರುದ್ಧ ಹೋರಾಡೋಕೆ ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಬೇಕು. ಉದಾಹರಣೆಗೆ ಹಿಂದಿನ ಕಾಲದಲ್ಲಿ ಒಂದು ಪಟ್ಟಣದ ಗೋಡೆಯಲ್ಲಿ ಅದರ ಬಾಗಿಲುಗಳೇ ತುಂಬಾ ಬಲಹೀನವಾಗಿತ್ತು. ಅದಕ್ಕೇ ಬಾಗಿಲುಗಳನ್ನ ಗಟ್ಟಿಮುಟ್ಟಾಗಿ ಕಟ್ತಿದ್ರು ಮತ್ತು ಅದನ್ನ ಕಾಯೋಕೆ ತುಂಬ ಕಾವಲುಗಾರರನ್ನ ಇಡ್ತಿದ್ರು. ಅದೇ ತರ ನಮ್ಮಲ್ಲಿ ಯಾವ ಬಲಹೀನತೆ ಇದೆ ಅಂತ ಗೊತ್ತಾದ ಮೇಲೆ ಅದಕ್ಕೆ ನಾವು ಚೆನ್ನಾಗಿ ಗಮನ ಕೊಡಬೇಕು. ಆಗ ಆ ಆಸೆ ವಿರುದ್ಧ ಹೋರಾಡೋಕೆ ಆಗುತ್ತೆ.—1 ಕೊರಿಂ. 9:27. w24.07 15 ¶5-7

ದಿನದ ವಚನ ಓದಿ ಚರ್ಚಿಸೋಣ—2026
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2026 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ