ಬುಧವಾರ, ಏಪ್ರಿಲ್ 29
ಬುದ್ಧಿ ನಿನಗೆ ಕಾವಲಾಗಿರುತ್ತೆ, ವಿವೇಚನಾ ಶಕ್ತಿ ನಿನ್ನನ್ನ ಕಾದುಕಾಪಾಡುತ್ತೆ.—ಜ್ಞಾನೋ. 2:11.
ನಾವೆಲ್ರೂ ಒಂದಲ್ಲ ಒಂದು ನಿರ್ಧಾರನ ಮಾಡ್ತಾನೇ ಇರ್ತೀವಿ. ಉದಾಹರಣೆಗೆ ಏನು ಅಡುಗೆ ಮಾಡೋದು, ಎಷ್ಟೊತ್ತಿಗೆ ಮಲಗೋದು ಅನ್ನೋದೆಲ್ಲ ಚಿಕ್ಕಪುಟ್ಟ ನಿರ್ಧಾರಗಳು. ಆದ್ರೆ ಇನ್ನೂ ಕೆಲವು ನಿರ್ಧಾರಗಳನ್ನ ಮಾಡೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ಅದು ನಮ್ಮ ಆರೋಗ್ಯದ ಮೇಲೆ, ಸಂತೋಷದ ಮೇಲೆ, ಕುಟುಂಬದ ಮೇಲೆ, ನಾವು ಮಾಡೋ ಆರಾಧನೆ ಮೇಲೆ ಪ್ರಭಾವ ಬೀರುತ್ತೆ. ಹಾಗಾಗಿ ಯಾವುದೇ ನಿರ್ಧಾರ ಮಾಡಿದ್ರೂ ಅದ್ರಿಂದ ನಮಗೆ, ನಮ್ಮ ಕುಟುಂಬಕ್ಕೆ ಒಳ್ಳೇದಾಗಬೇಕು ಅಂತ ಆಸೆ ಪಡ್ತೀವಿ. ಎಲ್ಲಕ್ಕಿಂತ ಹೆಚ್ಚಾಗಿ ಅದು ಯೆಹೋವನಿಗೆ ಇಷ್ಟ ಆಗಬೇಕು ಅಂತ ಬಯಸ್ತೀವಿ. (ರೋಮ. 12:1, 2) ಒಳ್ಳೆ ನಿರ್ಧಾರಗಳನ್ನ ಮಾಡಬೇಕಂದ್ರೆ ಮುಖ್ಯವಾಗಿ ಎಲ್ಲಾ ವಿಷ್ಯಗಳನ್ನ ತಿಳ್ಕೊಳ್ಳೋದು ತುಂಬ ಮುಖ್ಯ. ಯಾಕೆ? ನೀವು ಹುಷಾರಿಲ್ಲದೆ ಡಾಕ್ಟರ್ ಹತ್ರ ಹೋಗಿದ್ದೀರ ಅಂದ್ಕೊಳ್ಳಿ. ಅವರು ನಿಮ್ಮ ಹತ್ರ ಏನೂ ಕೇಳದೆ ಮಾತ್ರೆಗಳನ್ನ ಬರೆದ್ಕೊಡ್ತಾರಾ? ಇಲ್ಲ ಅಲ್ವಾ. ನಿಮಗೆ ಏನ್ ಆಯ್ತು, ಯಾಕೆ ಈ ತರ ಆಗ್ತಿದೆ, ಯಾವಾಗೆಲ್ಲಾ ಆಗ್ತಿದೆ ಅಂತ ಪ್ರಶ್ನೆಗಳನ್ನ ಕೇಳಿ ನಿಮ್ಮನ್ನ ಚೆನ್ನಾಗಿ ತಿಳ್ಕೊಳ್ತಾರೆ. ಅದೇ ತರ ನೀವೂ ಒಂದು ಒಳ್ಳೆ ನಿರ್ಧಾರ ಮಾಡಬೇಕಂದ್ರೆ, ಮೊದ್ಲು ಅದಕ್ಕೆ ಸಂಬಂಧಪಟ್ಟ ಎಲ್ಲಾ ವಿಷ್ಯಗಳನ್ನ ತಿಳ್ಕೊಬೇಕು. w25.01 14 ¶1-3
ಗುರುವಾರ, ಏಪ್ರಿಲ್ 30
ನೀನು ಮಾಡಿದ ಪಾಪವನ್ನ ಯೆಹೋವ ಕ್ಷಮಿಸ್ತಾನೆ. ನೀನು ಸಾಯಲ್ಲ.—2 ಸಮು. 12:13.
ಯೆಹೋವ ಕರುಣಾಮಯಿ ದೇವರು, “ಯಾರೂ ನಾಶ ಆಗಬಾರದು” ಅನ್ನೋದು ಆತನ ಇಷ್ಟ ಅಂತ ನಮಗೆ ಗೊತ್ತು. ಆದ್ರೆ ದೊಡ್ಡದೊಡ್ಡ ತಪ್ಪು ಮಾಡುವವ್ರಿಗೆ ಆತನು ಹೇಗೆ ಕರುಣೆ ತೋರಿಸ್ತಾನೆ? (2 ಪೇತ್ರ 3:9) ಉದಾಹರಣೆಗೆ, ರಾಜ ದಾವೀದ ವ್ಯಭಿಚಾರ ಮಾಡಿದ, ಕೊಲೆ ಮಾಡಿದ. ಇಷ್ಟೆಲ್ಲಾ ತಪ್ಪು ಮಾಡಿದ್ರೂ ಅವನು ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನನ್ನ ಕ್ಷಮಿಸಿದನು. (2 ಸಮು. 12:1-12) ರಾಜ ಮನಸ್ಸೆ ಬಗ್ಗೆ ನೋಡಿ. ಅವನು ತನ್ನ ಜೀವನದುದ್ದಕ್ಕೂ ಬರೀ ಕೆಟ್ಟ ಕೆಲಸಗಳನ್ನೇ ಮಾಡಿದ. ಇಷ್ಟೆಲ್ಲಾ ತಪ್ಪುಗಳನ್ನ ಮಾಡಿದ್ರೂ ಕೊನೆಗೆ ಅವನು ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನ ಕೈಬಿಟ್ಟನಾ? ಇಲ್ಲ. ಆಗ್ಲೂ ಯೆಹೋವ ಅವನಿಗೆ ಕರುಣೆ ತೋರಿಸಿದನು ಮತ್ತು ಕ್ಷಮಿಸಿದನು. (2 ಪೂರ್ವ. 33:9-16) ಈ ಉದಾಹರಣೆಗಳಿಂದ ನಮಗೆ ಏನು ಗೊತ್ತಾಗುತ್ತೆ? ಕಾರಣ ಇದ್ರೆ ಯೆಹೋವ ಖಂಡಿತ ಕರುಣೆ ತೋರಿಸೇ ತೋರಿಸ್ತಾನೆ. ಇವ್ರ ತರ ಒಬ್ಬ ವ್ಯಕ್ತಿ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ್ರೂ ತಿದ್ಕೊಂಡು ಬದಲಾದ್ರೆ ಅವನು ತೀರಿಹೋದ್ರೂ ಯೆಹೋವ ಅವನಿಗೆ ಮತ್ತೆ ಜೀವ ಕೊಡ್ತಾನೆ. w24.05 4 ¶12
ಶುಕ್ರವಾರ, ಮೇ 1
ದೇವರು ಭೇದಭಾವ ಮಾಡಲ್ಲ.—ರೋಮ. 2:11.
ಯೆಹೋವ ದೇವರು ಇಸ್ರಾಯೇಲ್ಯರನ್ನ ಈಜಿಪ್ಟಿನಿಂದ ಬಿಡಿಸ್ಕೊಂಡು ಬಂದ್ಮೇಲೆ ದೇವದರ್ಶನ ಡೇರೆಯಲ್ಲಿ ಪುರೋಹಿತರನ್ನ ಸೇವೆ ಮಾಡೋಕೆ ನೇಮಿಸಿದನು. ಅಷ್ಟೇ ಅಲ್ಲ ಪವಿತ್ರ ಡೇರೆಯಲ್ಲಿ ಬೇರೆ ಕೆಲಸಗಳನ್ನ ಮಾಡೋಕೆ ಲೇವಿಯರನ್ನ ನೇಮಿಸಿದನು. ಹಾಗಂತ ದೇವದರ್ಶನ ಡೇರೆಯಲ್ಲಿ ಕೆಲಸ ಮಾಡ್ತಿದ್ದವರಿಗೆ ಮತ್ತು ಆ ಡೇರೆಯ ಹತ್ರ ಇದ್ದ ಜನರಿಗೆ ಯೆಹೋವ ಬೇರೆಯವರಿಗಿಂತ ವಿಶೇಷ ಕಾಳಜಿ ತೋರಿಸಿದನಾ? ಇಲ್ಲ. ಯೆಹೋವ ಭೇದಭಾವ ಮಾಡಲಿಲ್ಲ. ಎಲ್ಲ ಇಸ್ರಾಯೇಲ್ಯರು ಯೆಹೋವನಿಗೆ ಒಳ್ಳೆ ಫ್ರೆಂಡ್ಸ್ ಆಗಬಹುದಿತ್ತು. ಉದಾಹರಣೆಗೆ, ಯೆಹೋವ ದೇವರು ಇಡೀ ಜನಾಂಗಕ್ಕೆ ಪವಿತ್ರ ಡೇರೆಯ ಮೇಲಿದ್ದ ಬೆಂಕಿ ಮತ್ತು ಮೋಡ ಕಾಣೋ ತರ ಮಾಡಿದನು. ಪವಿತ್ರ ಡೇರೆಯ ಮೇಲೆ ಮುಚ್ಚಿದ್ದ ಮೋಡ ಮೇಲೆ ಎದ್ದಾಗ ಅದು ದೂರದಲ್ಲಿರೋ ಇಸ್ರಾಯೇಲ್ಯರಿಗೂ ಕಾಣಿಸ್ತಿತ್ತು. (ವಿಮೋ. 40:38) ಅದನ್ನ ನೋಡಿದ ತಕ್ಷಣ ಎಲ್ಲ ಇಸ್ರಾಯೇಲ್ಯರು ತಮ್ಮ ವಸ್ತುಗಳನ್ನೆಲ್ಲ ತಗೊಂಡು ಡೇರೆ ಕಿತ್ಕೊಂಡು ಆ ಮೋಡ ಹಿಂದೆನೇ ಒಟ್ಟೊಟ್ಟಿಗೆ ಹೋಗ್ತಿದ್ರು. (ಅರ. 9:15-23) ಅದೇ ತರ ನಾವು ಇವತ್ತು ಈ ಲೋಕದ ಯಾವ ಮೂಲೆಯಲ್ಲಿ ಇದ್ದರೂ ಯೆಹೋವ ನಮ್ಮನ್ನ ಪ್ರೀತಿಸ್ತಾನೆ, ಯಾವಾಗ್ಲೂ ಚೆನ್ನಾಗಿ ನೋಡ್ಕೊಳ್ತಾನೆ ಮತ್ತು ನಮ್ಮನ್ನ ಕಾಪಾಡ್ತಾನೆ. w24.06 4 ¶10-12